ಕೀರ್ತಿ ನಿಧಿ ಕೇಸರಿಸಿಂಘ
ಆಶ್ಚರ್ಯವೇ ? ಆನಂದವೇ? ಆಘಾದವೇ?
ಇಲ್ಲ, ಈ ಎಲ್ಲ ಭಾವನೆಗಳೂ ಬೆರೆತಿದ್ದಂತಹ ಆಶ್ಚರ್ಯಾನಂದಾಘಾದವೇ ?!!
ತನ್ನ ಮನೆಯ ಬಾಗಿಲಲ್ಲಿ ಬಂದು ನಿಂದವರನ್ನು ಕಂಡು ಕ್ಷೇತ್ರಪಾಲೈಯನಿಗೆ ಕ್ಷಣ ಮಾತ್ರ ಉಸಿರು ಕಟ್ಟಿದಂತಾಯಿತು.
" ನಂಜಪ್ಪೈಯನವರೆ! "
" ಹೇಳದೆ ಕೇಳದೆ ಬಂದು ನಿಂತಿದ್ದೇವೆ! ಕ್ಷಮಿಸಿ ಕ್ಷೇತ್ರಪಾಲೈಯನವರೆ!ತೊಂದೆರೆಗೆ ಕ್ಷಮಿಸಿ."
" ಆಯೋ!ಹಾಗೆಲ್ಲ ಅನ್ನದಿರಿ! ! ನಿಮ್ಮ ಅನಿರೀಕ್ಷಿತವಾದ ಆಗಮನದಿಂದ ಸ್ವಲ್ಪ ಕಕ್ಕಾಬಿಕ್ಕಿಯಾಗಿ ಹೋದೆನಷ್ಟೆ. ಬನ್ನಿ ಬನ್ನಿ !"
" ನಿಮಗೆ ಸುದ್ದಿ ಕಳುಹಿಸಿ,ನಿಮ್ಮ ಉತ್ತರಕ್ಕೆ ಕಾದು, ನಂತರ ಹೊರಡುವ ವೇಳೆಗೆ, ನಾನೇ ಖುದ್ದಾಗಿ ಬರುವುದು ವಾಸಿ ಎನ್ನಿಸಿತು."
" ಒಳ್ಳೆ ಕೆಲಸ ಮಾಡಿದಿರಿ. ಬನ್ನಿ, ಒಳಕ್ಕೆ ಬನ್ನಿ.ಪೊನ್ನ!ಪೋನ್ನತಾನೆ ನೀನು?ಹೇಗೆ ಬೆಳೆದುಬಿಟ್ಟಿದ್ದೀಯಪ್ಪ! ಅದ್ಸರಿ,ರನ್ನ ಏನು ಮಾಡಿಕೊಂಡಿದ್ದಾನೆ?"
ತಂದೆಯೊಡನೆ ಆಗಮಿಸಿದ್ದ ಪೊನ್ನ ಹುಸಿ ನಗೆ ಬೀರಿ ಸಂಕೋಚದಿಂದ ತಲೆ ತಗ್ಗಿಸಿದ .
ಕ್ಷೇತ್ರ ಪಾಲೈಯನ ಸಂತಸಕ್ಕೆ ಪಾರವೇ ಇರಲಿಲ್ಲ. ಪೊನ್ನನ ಬೆನ್ನು ತಟ್ಟುತ್ತಲೇ ಇಬ್ಬರನ್ನೂ ಮನೆಯೊಳಕ್ಕೆ ಕರೆದೊಯ್ದ.
"ರನ್ನ ಸತ್ಯಮಂಗಳದಲ್ಲಿ ಸರದಾರ್ ಅಸ್ಲಾಮ್ ಜಾನವರು ಕೊಡಿಸಿದ ನೌಕರಿಯಲ್ಲಿ ತೃಪ್ತಿಯಿಂದ ಇದ್ದಾನೆ.ಆದರೆ ಇವನ ಆಸೆಯೇ ಬೇರೆಯಾಗಿದೆ. ಇವನಿಗೆ ಪಟ್ನದಲ್ಲಿ ಯಾವುದಾದರು ನೌಕರಿಗೆ ಸೇರುವ ಆಸೆ. ಪೀಡಿಸುತ್ತಲೇ ಇದ್ದ.ಅದಕ್ಕೆ ಈತನನ್ನೂ ಜೊತೆಯಲ್ಲಿ ಕರೆ ತಂದೆ."
ನಂಜಪ್ಪೈಯನವರು ಬೇಸರದಿಂದ ನುಡಿದರು.
ನಂಜಪ್ಪೈಯನವರು ಬೇಸರದಿಂದ ನುಡಿದರು.
"ಇರಲಿ ಬಿಡಿ.ಇದು ಸಂತೋಷದ ಸುದ್ದಿ ಇಲ್ಲವೇ ? ಈಗಿನ ಕಾಲದ ಹುಡುಗರ ಕನಸುಗಳಿಗೆ ಎಲ್ಲೆ ಎಲ್ಲಿದೆ?ಕನಸುಗಳೂ ಆಕಾಂಕ್ಷೆಗಳೂ ಅವರನ್ನು ಉನ್ನತಿಯ ತುತ್ತ ತುದಿಗೆ ಖಂಡಿತ ಏರಿಸುತ್ತವೆ ."
ಗೆಲುವಾಗಿ ನುಡಿಯುತ್ತಲೇ ಇಬ್ಬರನ್ನೂ ಹಜಾರಕ್ಕೆ ಕರೆತಂದು, ಅಲ್ಲಿದ್ದ ಆಸನಗಳ ಕಡೆ ಕೈ ತೋರಿದ ಕ್ಷೇತ್ರಪಾಲೈಯ .
ಗೆಲುವಾಗಿ ನುಡಿಯುತ್ತಲೇ ಇಬ್ಬರನ್ನೂ ಹಜಾರಕ್ಕೆ ಕರೆತಂದು, ಅಲ್ಲಿದ್ದ ಆಸನಗಳ ಕಡೆ ಕೈ ತೋರಿದ ಕ್ಷೇತ್ರಪಾಲೈಯ .
ದೂರದ ಪಯಣದಿಂದ ದಣಿದಿದ್ದ ನಂಜಪ್ಪೈಯನವರು ತನ್ನ ತೋಳಿಗೆ ತೂಗು ಹಾಕಿದ್ದ ಚೀಲವನ್ನು ಕೆಳಗಿಟ್ಟು 'ಉಸ್ಸ್'ಎಂದು ಕುಳಿತರು.
" ಬನ್ನಿ,ಬನ್ನಿ! ರುಕ್ಮಿಣಿಯಕ್ಕ ಚೆನ್ನಾಗಿದ್ದಾರೆಯೇ ? ಅವರನ್ನೂ ಕರೆ ತಂದಿರ ಬೇಕಿತ್ತು."
" ಏನೂ ಕೊರತೆ ಇಲ್ಲಾಮ್ಮ.ಇಲ್ಲಿಗೆ ಬರದಿದ್ದರೂ ಸದಾ ಅವಳಿಗೆ ಪಟ್ನದ ನೆನಪೇ. ಕೇಸರಿಯನ್ನು ಕುರಿತ ಚಿಂತೆ ಅವಳನ್ನು ಸಾದಾ ಕಾಡುತ್ತಲೇ ಇದೆ ."
" ಪಾಪ! ತುಂಬಾ ಹಚ್ಚಿಕೊಂಡು ಬಿಟ್ಟಿದ್ದರಲ್ಲವೇ? ಅವನೂ ಏನೂ ಕಡಿಮೆ ಇರಲಿಲ್ಲವಲ್ಲ!ಆತನನ್ನು ಪಟ್ನಕ್ಕೆ ಕರೆ ತರಲು ಎಷ್ಟೆಲ್ಲ ನಾಟಕವಾಡ ಬೇಕಾಗಿತ್ತು!"ಕ್ಷೇತ್ರ ಪಾಲೈಯನ ಮನದಲ್ಲಿ ಹಳೆಯ ನೆನಪುಗಳು ಮೆರವಣಿಗೆ ಹೋದವು .
"ಸರಿ. ಕೈಕಾಲು ತೊಳೆದು ಕೊಂಡು ಮೊದಲು ಪಲಹಾರ ಮಾಡುವಿರಂತೆ. ನಂತರ ಮುಂದಿನ ಮಾತು." ಎಂದ ಕ್ಷೇತ್ರಪಾಲೈಯ ಮಡದಿಯ ಕಡೆ ಕಣ್ಣು ಹೊರಳಿಸಿದ.
"ಇಗೋ ! ನೀವು ಸ್ನಾನ ಮಾಡಿ ಬರುವ ವೇಳೆಗೆ ಪಲಹಾರ ತಯಾರಾಗಿಬಿಡುತ್ತದೆ."
ಕ್ಷೇತ್ರಪಾಲೈಯನ ಮಡದಿ ಅಡುಗೆ ಕೋಣೆ ಸೇರಿದಳು.
"ಇಗೋ ! ನೀವು ಸ್ನಾನ ಮಾಡಿ ಬರುವ ವೇಳೆಗೆ ಪಲಹಾರ ತಯಾರಾಗಿಬಿಡುತ್ತದೆ."
ಕ್ಷೇತ್ರಪಾಲೈಯನ ಮಡದಿ ಅಡುಗೆ ಕೋಣೆ ಸೇರಿದಳು.
"ಮೊದಲಿಗೆ ಒಂದೇ ಒಂದು ಪ್ರಶ್ನೆ ಗೆಳೆಯರೇ. ನನ್ನ ಕೇಸರಿ ಹೇಗಿದ್ದಾನೆ? ಇಲ್ಲಿ ಏನು ಮಾಡಿಕೊಂಡಿದ್ದಾನೆ? ಈಚೆಗೆ ಸರದಾರ್ ಅಸ್ಲಾಮ್ ಜಾನ್ ಕೂಡ ನಮ್ಮೂರಕಡೆ ಕಾಣಿಸಿಕೊಂಡಿಲ್ಲ. ಹುಡುಗನ ಬಗ್ಗೆ ಇತ್ತೀಚಿಗೆ ಯಾವ ಸುದ್ದಿಯೂ ಇಲ್ಲವಲ್ಲಾ ಎಂದು ರುಕ್ಮಿಣಿಗೆ ಬಹಳವಾಗಿ ಕಾಳಜಿಯಾಗಿಬಿಟ್ಟಿದೆ."
ನಂಜಪ್ಪೈಯನವರ ದನಿಯಲ್ಲಿ ಆತಂಕ ತುಂಬಿ ತುಳುಕಿತು.
ನಂಜಪ್ಪೈಯನವರ ದನಿಯಲ್ಲಿ ಆತಂಕ ತುಂಬಿ ತುಳುಕಿತು.
"ಅವನಿಗೇನು ಕಡಿಮೆ ಹೇಳಿ ನಂಜಪ್ಪೈಯನವರೆ? ವಿದ್ಯಾಭ್ಯಾಸ ಮಾಡಿಕೊಂಡು, ನಾನು ಮೊದಲೇ ನಿಮಗೆ ಸಂದೇಶ ಕಳುಹಿಸಿದ್ದಂತೆ, ಒಳ್ಳೆಯವರ ಆಶ್ರಯದಲ್ಲಿ ಸುರಕ್ಷಿತವಾಗಿದ್ದಾನೆ."
ಮೃದುವಾದ ಮಾತಿನಲ್ಲಿ ಸಾಂತ್ವನ ನೀಡಿದ ಕ್ಷೇತ್ರ ಪಾಲೈಯ.
" ಆ ಮಗುವನ್ನ ಕುತ್ತಿಗೆ ಹಿಡಿದು ನೂಕಿದಂತೆ ಮನೆಯಿಂದಾಚೆ ಹಾಕಿದೆನಲ್ಲ ಎಂಬ ಪಾಪಪ್ರಜ್ಞೆ ನನ್ನನ್ನೂ ಒಮ್ಮೊಮೆ ಕಾಡುತ್ತದೆ. ಪಾಪ! ತಬ್ಬಲಿ! ರುಕ್ಮಿಣಿಗೆ ಅದೆಷ್ಟು ಹಚ್ಚಿಕೊಂಡಿದ್ದ !"ನಿಟ್ಟುಸಿರು ಬಿಟ್ಟರು ನಂಜಪ್ಪೈಯನವರು.
"ಆತ ನನ್ನನ್ನ ಅಲ್ಲದಿದ್ದರೂ ರುಕ್ಮಿಣಿಯನ್ನು ನೆನೆನೆನೆದು ಅದೆಷ್ಟು ಕೊರಗುತ್ತಿದ್ದಾನೋ ಏನೋ?" ತನಗೆ ತಾನೇ ಮಾತನಾಡಿಕೊಳ್ಳುವವರಂತೆ ಉಸುರಿದರು ನಂಜಪ್ಪೈಯನವರು.
"ಅದಕ್ಕೆಲ್ಲ ಅವನಿಗೆ ಪುರುಸೊತ್ತು ಎಲ್ಲಿದೆ ನಂಜಪ್ಪೈಯ ನವರೇ?"
ತಟ್ಟೆಂದು ಉತ್ತರಿಸಿಬಿಟ್ಟ ಕ್ಷೇತ್ರ ಪಾಲೈಯ, ನಂಜಪ್ಪೈಯನವರ ಮುಖದಲ್ಲಿ ಕವಿದ ನಿರಾಶೆಯ ಛಾಯೆಯನ್ನು ಕಂಡು ಕೂಡಲೇ ಮಾತಿನ ಧಾಟಿ ತಿರುಗಿಸಿದ.
" ಅವನಿನ್ನೂ ಅಂದು ನೀವು ಕಂಡ ಮಗುವೆಂದು ಭಾವಿಸಿದ್ದೀರ ಗೆಳೆಯರೇ ? ವಿದ್ಯಾಭ್ಯಾಸ, ಮಲ್ಲ ಯುದ್ಧ, ಕುದುರೆ ಸವಾರಿ, ವ್ಯಾಯಾಮವೆಂದು ಅವನ ಸಮಯವೆಲ್ಲ ಹೊಸ ಹೊಸ ವಿದ್ಯೆ ಕಲಿಯುವುದರಲ್ಲೇ ಕಳೆಯುತ್ತಿದೆ ."
" ಕುದುರೆ ಸವಾರಿಯೇ? ಕೇಸರಿ ಸವಾರಿ ಮಾಡುತ್ತಾನೆಯೇ?" ಪೊನ್ನನ ಮುಖ ಆಶ್ಚರ್ಯದಲ್ಲಿ ಅರಳಿತು.
" ಹೂಂ! ಕೇಸರಿ ಈಗ ಕುದುರೆ ಸವಾರಿಯಲ್ಲಿ ನಿಪುಣನಾಗಿದ್ದಾನೆ.ನನ್ನ ಅಶ್ವ ಶಾಲೆಯಲ್ಲಿ ಹುಟ್ಟಿದ ಒಂದು ಕುದುರೆ ಈಗ ಅವನದ್ದಾಗಿದೆ."
" ನಿಮ್ಮ ಅಶ್ವ ಶಾಲೆಯಲ್ಲಿ ಮರಿಕುದುರೆಗಳೂ ಇವೆಯೇನು?"
ಬೆರಗಾಗಿ ಕಣ್ಣಗಲಿಸಿದ ಪೊನ್ನ.
" ಹುಂ ಮತ್ತೆ! ವಾರದ ಹಿಂದೆ ಕೂಡ ನನ್ನ ಅಶ್ವ ಶಾಲೆಯಲ್ಲಿ ಒಂದು ಕುದುರೆ ಮರಿಯ ಜನನವಾಗಿದೆ. ಪ್ರತ್ಯೇಕವಾದ ಆರೈಕೆಗಾಗಿ ಇಲ್ಲೇ ಮನೆಯ ಹಿತ್ತಲಿನ ಲಾಯದಲ್ಲಿ ಇರಿಸಿದ್ದೇನೆ. ಹೋಗಿ ನೋಡು ಪೊನ್ನ."
ಪೊನ್ನ ಕುತೂಹಲದೊಡನೆ ಲಾಯದ ಕಡೆ ಹೊರಟ.
ನಂಜಪ್ಪೈಯನವರ ಮುಖದಲ್ಲಿ ಕವಿದಿದ್ದ ದುಃಖದ ಛಾಯೆ ಇನ್ನೂ ಅಗಲದಿರುವುದನ್ನು ಗಮನಿಸಿದ ಕ್ಷೇತ್ರಪಾಲೈಯ .
"ನಂಜಪ್ಪೈಯನವರೆ ! ಕೇಸರಿ ನೀಮ್ಮ ಗೂಡಲ್ಲಿ ಬೆಳೆದ ಪುಟ್ಟ ಹಕ್ಕಿ! ಅವನು ನಿಮನ್ನು ಮರೆಯುವುದು ಸಾಧ್ಯವೇನು? ನಿಮ್ಮ ಮತ್ತು ರುಕ್ಮಿಣಿಯಮ್ಮಳ ನೆನಪುಗಳನ್ನು ಮನದಾಳದಲ್ಲಿ ಹುದುಗಿಸಿಟ್ಟುಕೊಂಡಿದ್ದರೂ, ಆತ ಹೊರಗೆ ಯಾರ ಮುಂದೆಯೂ ಅದನ್ನ ವ್ಯಕ್ತಪಡಿಸಿಕೊಳ್ಳುವುದಿಲ್ಲ. ಏನೇ ಆಗಿರಲಿ ಆತ ವಿಶ್ವನಾಥನ ಮಗನಲ್ಲವೇ ? ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಕೂಡ ಆತ ದೃಡಶಾಲಿಯಾಗಿ ಪರಿವರ್ತಿಸಿದ್ದಾನೆ. ಹೇಗೂ ನೀವೇ ನೋಡುವುದರಲ್ಲಿದ್ದೀರಲ್ಲ. "
" ಕುದುರೆ ಸವಾರಿಯೇ? ಕೇಸರಿ ಸವಾರಿ ಮಾಡುತ್ತಾನೆಯೇ?" ಪೊನ್ನನ ಮುಖ ಆಶ್ಚರ್ಯದಲ್ಲಿ ಅರಳಿತು.
" ಹೂಂ! ಕೇಸರಿ ಈಗ ಕುದುರೆ ಸವಾರಿಯಲ್ಲಿ ನಿಪುಣನಾಗಿದ್ದಾನೆ.ನನ್ನ ಅಶ್ವ ಶಾಲೆಯಲ್ಲಿ ಹುಟ್ಟಿದ ಒಂದು ಕುದುರೆ ಈಗ ಅವನದ್ದಾಗಿದೆ."
" ನಿಮ್ಮ ಅಶ್ವ ಶಾಲೆಯಲ್ಲಿ ಮರಿಕುದುರೆಗಳೂ ಇವೆಯೇನು?"
ಬೆರಗಾಗಿ ಕಣ್ಣಗಲಿಸಿದ ಪೊನ್ನ.
" ಹುಂ ಮತ್ತೆ! ವಾರದ ಹಿಂದೆ ಕೂಡ ನನ್ನ ಅಶ್ವ ಶಾಲೆಯಲ್ಲಿ ಒಂದು ಕುದುರೆ ಮರಿಯ ಜನನವಾಗಿದೆ. ಪ್ರತ್ಯೇಕವಾದ ಆರೈಕೆಗಾಗಿ ಇಲ್ಲೇ ಮನೆಯ ಹಿತ್ತಲಿನ ಲಾಯದಲ್ಲಿ ಇರಿಸಿದ್ದೇನೆ. ಹೋಗಿ ನೋಡು ಪೊನ್ನ."
ಪೊನ್ನ ಕುತೂಹಲದೊಡನೆ ಲಾಯದ ಕಡೆ ಹೊರಟ.
ನಂಜಪ್ಪೈಯನವರ ಮುಖದಲ್ಲಿ ಕವಿದಿದ್ದ ದುಃಖದ ಛಾಯೆ ಇನ್ನೂ ಅಗಲದಿರುವುದನ್ನು ಗಮನಿಸಿದ ಕ್ಷೇತ್ರಪಾಲೈಯ .
"ನಂಜಪ್ಪೈಯನವರೆ ! ಕೇಸರಿ ನೀಮ್ಮ ಗೂಡಲ್ಲಿ ಬೆಳೆದ ಪುಟ್ಟ ಹಕ್ಕಿ! ಅವನು ನಿಮನ್ನು ಮರೆಯುವುದು ಸಾಧ್ಯವೇನು? ನಿಮ್ಮ ಮತ್ತು ರುಕ್ಮಿಣಿಯಮ್ಮಳ ನೆನಪುಗಳನ್ನು ಮನದಾಳದಲ್ಲಿ ಹುದುಗಿಸಿಟ್ಟುಕೊಂಡಿದ್ದರೂ, ಆತ ಹೊರಗೆ ಯಾರ ಮುಂದೆಯೂ ಅದನ್ನ ವ್ಯಕ್ತಪಡಿಸಿಕೊಳ್ಳುವುದಿಲ್ಲ. ಏನೇ ಆಗಿರಲಿ ಆತ ವಿಶ್ವನಾಥನ ಮಗನಲ್ಲವೇ ? ದೈಹಿಕವಾಗಿ ಮಾತ್ರವಲ್ಲದೆ ಮಾನಸಿಕವಾಗಿಯೂ ಕೂಡ ಆತ ದೃಡಶಾಲಿಯಾಗಿ ಪರಿವರ್ತಿಸಿದ್ದಾನೆ. ಹೇಗೂ ನೀವೇ ನೋಡುವುದರಲ್ಲಿದ್ದೀರಲ್ಲ. "
ಸ್ವಲ್ಪ ಸಮಾಧಾನವಾದಂತೆ ಕಂಡರೂ ನಂಜಪ್ಪೈಯನವರ ಮನದಲ್ಲಿ ಏನೋ ವ್ಯಾಕೂಲ.ಹೊಟ್ಟೆಯಲ್ಲಿ ವರ್ಣಿಸಲಾರದ ಸಂಕಟ.
"ನೀವು ಸ್ನಾನ ಮುಗಿಸಿ ,ತಿಂಡಿ ತಿಂದು ಸ್ವಲ್ಪ ಆರಾಮವಾಗಿ ಮಲಗಿ. ನಂತರ ನಿಮ್ಮನ್ನು ಆಸ್ಥಾನ ಗಮಕಿಯ ಗೃಹಕ್ಕೆ ಕರೆದೊಯ್ಯುತ್ತೇನೆ.ನಿಮ್ಮ ಕೇಸರಿಯನ್ನ ಕಣ್ತುಂಬ ನೋಡುವಿರಂತೆ." ಉತ್ಸಾಹದಿಂದ ನುಡಿದ ಕ್ಷೇತ್ರಪಾಲೈಯ.
" ಕೇಸರಿಗೆ ಆಶ್ರಯ ನೀಡಿರುವ ಆ ತಾಯಿಯನ್ನು ಕಂಡು ವಂದಿಸ ಬೇಕು.ನೇರವಾಗಿ ರಾಜ ಗಮಕಿಯ ಮನೆಗೆ ತೆರಳೋಣವೆಂದರೆ ಪ್ರಯಾಣದ ಆಯಾಸ, ದಣಿವು, ಕೊಳಕಿನೊಡನೆ ಅಪರಿಚಿತರ ಮನೆಗೆ ಹೋಗಲು ಸಂಕೋಚವಾಯಿತು.ಆದರೆ ಕೂಡಲೇ ಆ ನನ್ನ ಕಂದನನ್ನು ಕಾಣುವ ಬಯಕೆಯ ಒತ್ತಡವನ್ನು ತಾಳಲಾಗುತ್ತಿಲ್ಲ."
ನಂಜಪ್ಪೈಯನವರ ಕಣ್ಣುಗಳಲ್ಲಿ ಕಂಬನಿ ಮಿನುಗಿತು .
ಸ್ನಾನದ ಮನೆಯ ಕಡೆ ನಡೆಯುತ್ತಿದ್ದ ಹಾಗೆ ತನ್ನ ಮೆಲ್ವಸ್ತ್ರದಿಂದ ಕಣ್ಣೊರೆಸಿ ಕೊಂಡರು ನಂಜಪ್ಪೈಯನವರು.
"ಕ್ಷೇತ್ರ ಪಾಲೈಯನವರೇ ! ನಾನು ಪಟ್ನಕ್ಕೆ ಬಂದು ಸೇರುವುದರಲ್ಲಿ ಏನೇನೊ ಕೆಟ್ಟ ಸುದ್ಧಿಗಳನ್ನು ಕೇಳಿಸಿಕೊಳ್ಳುವ ಅವಕಾಶಗಳು ಒದಗಿ ಬಂದವು.ನಾನು ಕೇಳಿದ್ದೆಲ್ಲ ನಿಜವೇ?"
ಕ್ಷೇತ್ರಪಾಲೈಯನ ಮುಖವನ್ನು ದಿಟ್ಟಿಸುತ್ತ ಕೇಳಿದರು ನಂಜಪ್ಪೈಯನವರು
" ಏನು ಸಮಾಚಾರ?ನೀವು ಆಗಮಿಸಿದಾಗಿನಿಂದ ಗಮನಿಸುತ್ತಿದ್ದೇನೆ. ನಿಮ್ಮ ಮನಸ್ಸಿನಲ್ಲಿ ಏನೋ ಚಂಚಲವಿರುವ ಹಾಗೆ ಕಾಣುತ್ತಿದೆ. ಅದೇನೆಂದು ಮನ ಬಿಚ್ಚಿ ಹೇಳಿ ನಂಜಪ್ಪೈಯನವರೆ. "
ಹಂಡೆಯಲ್ಲಿದ್ದ ನೀರಿನ ಬಿಸಿಯನ್ನು ಶೋಧಿಸುತ್ತಲೇ ನುಡಿದ ಕ್ಷೇತ್ರ ಪಾಲೈಯ,ಮತ್ತೊಂದು ಸೌದೆಯನ್ನು ನೀರೊಲೆಯೊಳಕ್ಕೆ ತೂರಿಸಿದ.
"ಇಲ್ಲಿಯ ರಾಜಕೀಯ ಪರಿಸ್ಥಿತಿ ಅಷ್ಟು ಚೆನ್ನಾಗಿಲ್ಲವಂತೆ? ಸುಲ್ತಾನರ ಆಡಳಿತವೇ ಕೊನೆಗೊಳ್ಳುವ ಅಪಾಯವಿದೆಯಂತೆ? ಪಟ್ನದಲ್ಲೇ ಪ್ರಜೆಗಳು ಸುರಕ್ಷಿತವಾಗಿಲ್ಲವಂತೆ? "
ನಂಜಪ್ಪೈಯನವರು ದನಿ ತಗ್ಗಿಸಿ ಗಂಭೀರವಾಗಿ ನುಡಿದು, ಪ್ರಶ್ನಾರ್ಥವಾಗಿ ಕ್ಷೇತ್ರಪಾಲೈಯನನ್ನು ದಿಟ್ಟಿಸಿದರು.
"ಎಲ್ಲ ಜನರೂ ಒಂದೇ ರೀತಿ ಇರುವರೇ ಹೇಳಿ!ನೆಮ್ಮಧಿಯಾಗಿರುವ ಪ್ರಜೆಗಳ ಮಧ್ಯೆ ಭೀತಿ ಹರಡಿಸಲು ಕೆಲವು ದೇಶ ದ್ರೋಹಿಗಳು ಬಾಯಿಗೆ ಬಂದದ್ದನ್ನ ಒದರುತ್ತಿರುತ್ತಾರೆ.ದುಷ್ಟರ ಇಂತಹ ಮಾತೆಲ್ಲ ಸಹಜವೇ ಅಲ್ಲವೇ ನಂಜಪ್ಪೈಯನವರೆ? ಅದನ್ನೆಲ್ಲ ಮನಸ್ಸಿಗೆ ಹಾಕಿಕೊಳ್ಳ ಬಾರದೆಂದು ನಿಮಗೂ ತಿಳಿಯದೆ? ನೀವೇಕೆ ಚಿಂತಿಸುವಿರಿ?"
" ಚಿಂತಿಸದೆ ಹೇಗೆ ಕ್ಷೇತ್ರ ಪಾಲೈಯನವರೆ? ಯಾವ ಕ್ಷಣದಲ್ಲಿಯೂ ಯುದ್ಧ ಸಿಡಿಯುವ ಸಂಭವವಿರುವ ಈ ಪಟ್ನದಲ್ಲಿ, ಒಬ್ಬ ತಂದೆ ತನ್ನ ಮಗುವನ್ನು ಬಿಟ್ಟು ಹೋಗುವುದಾದರೂ ಹೇಗೆ?"
" ಹಾಗಾದರೆ ಪೋನ್ನನಿಗೆ ಇಲ್ಲಿ ನೌಕರಿ ಬೇಡವೆನ್ನುವಿರಾ ?ಆತನನ್ನು ಇಲ್ಲಿ ಬಿಟ್ಟು ಹೋಗುವುದಿಲ್ಲವೇ?"
" ಇಲ್ಲ ಕ್ಷೇತ್ರಪಾಲೈಯನವರೆ.ಪೊನ್ನನನ್ನು ಇಲ್ಲಿ ಬಿಟ್ಟು ಹೋಗುವ ಯೋಚನೆ ಇತ್ತು.ಆದರೆ ಇಲ್ಲಿಯ ಪರಿಸ್ಥಿತಿ ನೋಡಿದ ಮೇಲೆ ನಾನು ಕೇಸರಿಯನ್ನೂ ಕೂಡ ಇಲ್ಲಿ ಬಿಟ್ಟು ಹೋಗಬಾರದೆಂಬ ತೀರ್ಮಾನಕ್ಕೆ ಬಂದಿದ್ದೇನೆ ."
"ಹಾಗಾದರೆ ವಿಶ್ವನಾಥನ ಕನಸುಗಳು?"
" ಎಂದೋ ಸತ್ತವನ ಕನಸಿಗಾಗಿ ಇಂದು ನನ್ನ ಮಕ್ಕಳ ಪ್ರಾಣವನ್ನ ಒತ್ತೆ ಇಡಲು ನಾನು ಒಪ್ಪುವುದಿಲ್ಲ." ಗಂಭೀರವಾಗಿ ತೀರ್ಮಾನವಾಗಿ ನುಡಿದರು ನಂಜಪ್ಪೈಯ.
"ಹಾಗಾದರೆ ವಿಶ್ವನಾಥನ ಕನಸುಗಳು?"
" ಎಂದೋ ಸತ್ತವನ ಕನಸಿಗಾಗಿ ಇಂದು ನನ್ನ ಮಕ್ಕಳ ಪ್ರಾಣವನ್ನ ಒತ್ತೆ ಇಡಲು ನಾನು ಒಪ್ಪುವುದಿಲ್ಲ." ಗಂಭೀರವಾಗಿ ತೀರ್ಮಾನವಾಗಿ ನುಡಿದರು ನಂಜಪ್ಪೈಯ.
ಸಿಡಿಲು ಬಡಿದವನಂತೆ ನಂಜಪ್ಪೈಯನವರನ್ನು ದಿಟ್ಟಿಸಿ ನೋಡಿದ ಕ್ಷೇತ್ರಪಾಲೈಯ.
ವರ್ಷಗಳ ಹಿಂದೆ ರುಕ್ಮಿಣಿಯಮ್ಮ ಗೋಗರೆದು ಆಡಿದ್ದ ಅದೇ ಮಾತುಗಳು!ಅಂದು ನಂಜಪ್ಪೈಯನವರ ನಿರ್ಧಾರವನ್ನು ಯಾವ ಬೇಡಿಕೆಯೂ ಕದಲಿಸಲಿಲ್ಲ.ಆದರೆ ಇಂದು? ಕಾಲ ಈ ಕರ್ಮವೀರನ ಮನಸ್ಸನ್ನೂ ಮೃದುಗೊಳಿಸಿ ಬಿಟ್ಟಿತೇ?
ಕೇಸರಿಯನ್ನು ಇವರು ಕರೆದೊಯ್ದರೆ ವಿಶ್ವನಾಥನಿಗೆ ಮಿತ್ರ ದ್ರೋಹ ಎಸಗಿದಂತೆ ಆಗುವುದಿಲ್ಲವೇ? ಮೇಲಾಗಿ ಇಂದು ಒಬ್ಬ ರಣಕೇಸರಿಯಾಗಿ ರೂಪಗೊಂಡಿರುವ ಆ ಯುವಕನ ಪರಿಶ್ರಮ, ಆತನ ಭವಿಷ್ಯ ಜೀವನ ಎಲ್ಲ ವ್ಯರ್ಥವಾಗುವುದಿಲ್ಲವೇ ?
ಚಿಂತಾಕ್ರಾಂತನಾಗಿ ತನ್ನನ್ನರಿಯದೆ ಕುದಿಯುವ ನೀರಿಗೆ ಕೈ ಹಾಕಿದ ಕ್ಷೇತ್ರಪಾಲೈಯ "ಹಾಂ!" ಎಂದು ಚೀರಿದ!
ವರ್ಷಗಳ ಹಿಂದೆ ರುಕ್ಮಿಣಿಯಮ್ಮ ಗೋಗರೆದು ಆಡಿದ್ದ ಅದೇ ಮಾತುಗಳು!ಅಂದು ನಂಜಪ್ಪೈಯನವರ ನಿರ್ಧಾರವನ್ನು ಯಾವ ಬೇಡಿಕೆಯೂ ಕದಲಿಸಲಿಲ್ಲ.ಆದರೆ ಇಂದು? ಕಾಲ ಈ ಕರ್ಮವೀರನ ಮನಸ್ಸನ್ನೂ ಮೃದುಗೊಳಿಸಿ ಬಿಟ್ಟಿತೇ?
ಕೇಸರಿಯನ್ನು ಇವರು ಕರೆದೊಯ್ದರೆ ವಿಶ್ವನಾಥನಿಗೆ ಮಿತ್ರ ದ್ರೋಹ ಎಸಗಿದಂತೆ ಆಗುವುದಿಲ್ಲವೇ? ಮೇಲಾಗಿ ಇಂದು ಒಬ್ಬ ರಣಕೇಸರಿಯಾಗಿ ರೂಪಗೊಂಡಿರುವ ಆ ಯುವಕನ ಪರಿಶ್ರಮ, ಆತನ ಭವಿಷ್ಯ ಜೀವನ ಎಲ್ಲ ವ್ಯರ್ಥವಾಗುವುದಿಲ್ಲವೇ ?
ಚಿಂತಾಕ್ರಾಂತನಾಗಿ ತನ್ನನ್ನರಿಯದೆ ಕುದಿಯುವ ನೀರಿಗೆ ಕೈ ಹಾಕಿದ ಕ್ಷೇತ್ರಪಾಲೈಯ "ಹಾಂ!" ಎಂದು ಚೀರಿದ!
******************************************************
ಅದೇ ಸಮಯ, ಅನ್ನದಾನ ಶೆಟ್ಟರ ಛತ್ರದಲ್ಲಿ ಕೇಸರಿಯ ಪರಿಸ್ಥಿತಿ ಅತೀತ ಗೊಂದಲಕ್ಕೊಳಗಾಗಿತ್ತು.
ಎಲುಬನ್ನು ಕಂಡ ಶ್ವಾನಗಳಂತೆ ಸಿಪಾಯಿಗಳೆಲ್ಲ ಗುಂಪಾಗಿ ಒಬ್ಬರ ಮೇಲೊಬ್ಬರು ಬಿದ್ದುಕೊಂಡು ಥೈಲಿಯನ್ನು ಕಸಿದಿಕೊಳ್ಳಲು ಸುಲೋಚನಳ ಮೇಲೆರಗಿದ್ದರೂ, ಕೇಸರಿಯ ಹಿಂದೆ ಒಬ್ಬ ಸೇವಕನನ್ನು ಕಾವಲಿರಿಸಲು ಮರೆತಿರಲಿಲ್ಲ ಸುಭಾನ್.
ಜಿಂಕೆಯಂತೆ ನಡುನಡುಕುತ್ತ ಥೈಲಿಯನ್ನು ಎತ್ತಿ ಹಿಡಿದಿದ್ದ ಸುಲೋಚನಳ ಬಳಿ ಕವಿದಿದ್ದ ಸಿಪಾಯಿಗಳ ಗುಂಪನ್ನು ಸೀಳಿಕೊಂಡು ಮುನ್ನುಗ್ಗಿದ ಸುಭಾನ್. ತನ್ನ ಖಡ್ಗದ ತುದಿಯಿಂದ ಥೈಲಿಯನ್ನು ತನ್ನ ಬಳಿ ಸೆಳೆದುಕೊಂಡವ ಸಂತೋಷ ಮಿತಿಮೀರಿ ಉದ್ವೇಕಗೊಂಡು ಗುಡುಗಿದ.
" ಆ ಚೊಕ್ರಾನನ್ನು ಇನ್ನೂ ಉಳಿಸಲಾರೆ ! ಎಂದಿದ್ದರೂ ಆತನಿಂದ ನನಗೆ ಗಂಡಾಂತರ ತಪ್ಪಿದ್ದಲ್ಲ."
ಥೈಲಿಗಾಗಿ ಪರದಾಡುತ್ತ ಹಿಂಬಾಲಿಸಿದ ಪಾಂಡು ರಂಗಾಚಾರ್ಯರನ್ನೋ, 'ನಿಮಗೆ ಬೇಕಾದ ಚೀಲ ಕೊಟ್ಟಿದ್ದೇನೆ. ಆ ಹುಡುಗನನ್ನು ಬಿಟ್ಟು ಬಿಡಿ'ಎಂದು ಪ್ರಲಾಪಿಸಿದ ಸುಲೋಚನಳನ್ನೋ ಲೆಕ್ಕಿಸದೆ ಧರ್ಪದಿಂದ ಕೇಸರಿಯ ಕಡೆ ಹೆಜ್ಜೆ ಹಾಕಿದ ಸುಭಾನ್.
ಕತ್ತಲು ಕಣ್ಣನ್ನು ಕಟ್ಟಿದಂತೆ ಭಾಸವಾಗಿ, ಮರುಕಳಿಸುತ್ತಿದ್ದ ಜ್ವರದಿಂದ ಮೈಯೆಲ್ಲಾ ಕಂಪಿಸುತ್ತಿರಲು, ನಿಲ್ಲಲಾರದೆ ತೂರಾಡ ತೊಡಗಿದ ಕೇಸರಿ.
ಅವನ ಮನಸ್ಸಲ್ಲಿ ರುಕ್ಮಿಣಿಯಮ್ಮಳ ಚಿತ್ರ ಮಸುಕು ಮಸುಕಾಗಿ ಮೂಡಿಬಂದಿತು. ಅವಳು ಕೇಸರಿಯನ್ನು ಕುರಿತು ಕೈಗಳನ್ನು ಚಾಚಿ "ಬಾ ಕಂದ" ಎಂದು ಕರೆದ ಹಾಗಾಯಿತು.
ಕೇಸರಿ "ಅಮ್ಮಾ!" ಎಂದು ಬಿಕ್ಕಿದ.
*************************ಆಮೇಲೆ?**********************
ಎಲುಬನ್ನು ಕಂಡ ಶ್ವಾನಗಳಂತೆ ಸಿಪಾಯಿಗಳೆಲ್ಲ ಗುಂಪಾಗಿ ಒಬ್ಬರ ಮೇಲೊಬ್ಬರು ಬಿದ್ದುಕೊಂಡು ಥೈಲಿಯನ್ನು ಕಸಿದಿಕೊಳ್ಳಲು ಸುಲೋಚನಳ ಮೇಲೆರಗಿದ್ದರೂ, ಕೇಸರಿಯ ಹಿಂದೆ ಒಬ್ಬ ಸೇವಕನನ್ನು ಕಾವಲಿರಿಸಲು ಮರೆತಿರಲಿಲ್ಲ ಸುಭಾನ್.
ಜಿಂಕೆಯಂತೆ ನಡುನಡುಕುತ್ತ ಥೈಲಿಯನ್ನು ಎತ್ತಿ ಹಿಡಿದಿದ್ದ ಸುಲೋಚನಳ ಬಳಿ ಕವಿದಿದ್ದ ಸಿಪಾಯಿಗಳ ಗುಂಪನ್ನು ಸೀಳಿಕೊಂಡು ಮುನ್ನುಗ್ಗಿದ ಸುಭಾನ್. ತನ್ನ ಖಡ್ಗದ ತುದಿಯಿಂದ ಥೈಲಿಯನ್ನು ತನ್ನ ಬಳಿ ಸೆಳೆದುಕೊಂಡವ ಸಂತೋಷ ಮಿತಿಮೀರಿ ಉದ್ವೇಕಗೊಂಡು ಗುಡುಗಿದ.
" ಆ ಚೊಕ್ರಾನನ್ನು ಇನ್ನೂ ಉಳಿಸಲಾರೆ ! ಎಂದಿದ್ದರೂ ಆತನಿಂದ ನನಗೆ ಗಂಡಾಂತರ ತಪ್ಪಿದ್ದಲ್ಲ."
ಥೈಲಿಗಾಗಿ ಪರದಾಡುತ್ತ ಹಿಂಬಾಲಿಸಿದ ಪಾಂಡು ರಂಗಾಚಾರ್ಯರನ್ನೋ, 'ನಿಮಗೆ ಬೇಕಾದ ಚೀಲ ಕೊಟ್ಟಿದ್ದೇನೆ. ಆ ಹುಡುಗನನ್ನು ಬಿಟ್ಟು ಬಿಡಿ'ಎಂದು ಪ್ರಲಾಪಿಸಿದ ಸುಲೋಚನಳನ್ನೋ ಲೆಕ್ಕಿಸದೆ ಧರ್ಪದಿಂದ ಕೇಸರಿಯ ಕಡೆ ಹೆಜ್ಜೆ ಹಾಕಿದ ಸುಭಾನ್.
ಕತ್ತಲು ಕಣ್ಣನ್ನು ಕಟ್ಟಿದಂತೆ ಭಾಸವಾಗಿ, ಮರುಕಳಿಸುತ್ತಿದ್ದ ಜ್ವರದಿಂದ ಮೈಯೆಲ್ಲಾ ಕಂಪಿಸುತ್ತಿರಲು, ನಿಲ್ಲಲಾರದೆ ತೂರಾಡ ತೊಡಗಿದ ಕೇಸರಿ.
ಕೇಸರಿ "ಅಮ್ಮಾ!" ಎಂದು ಬಿಕ್ಕಿದ.
*************************ಆಮೇಲೆ?**********************
